ಯಲ್ಲಾಪುರ: ಪಟ್ಟಣದ ರವೀಂದ್ರನಗರದ ಶಕ್ತಿಗಣಪತಿ ದೇವಸ್ಥಾನದ ಕಾರ್ತಿಕೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶಿವರಾಮ ಗಾಂವ್ಕಾರ್ ಕನಕನಹಳ್ಳಿ ಸತ್ಯವಾನ ಸಾವಿತ್ರಿ ಕೀರ್ತನೆ ನಡೆಸಿಕೊಟ್ಟರು.
ಇವರಿಗೆ ಶಿವರಾಮ ಭಾಗವತ್ ಹಾರ್ಮೋನಿಯಂ ಹಾಗೂ ವಿ.ಟಿ.ಭಟ್ಟ ತಬಲಾ ಸಾಥ್ ನೀಡಿದರು. ಪ್ರಾರಂಭದಲ್ಲಿ ಕಾರ್ಯಕ್ರಮವನ್ನು ಲಕ್ಷ್ಮೀ ಶಂಕರ ಭಟ್ಟ ದೀಪ ಬೆಳಗಿಸಿ ಚಾಲನೆ ನೀಡಿದರು.ಹಿರಿಯರಾದ ನಾಗೇಶ ಭಟ್ಟ, ಪತ್ರಕರ್ತ ನರಸಿಂಹ ಸಾತೊಡ್ಡಿ ಉಪಸ್ಥಿತರಿದ್ದರು.